ಓಂಶಾಂತಿ ವಿಜಯ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಮರ್ಚಂದ್ಜೈನ್ ಹಾಗೂ ವಿಜಯ್ ಸುರಾನಾ ಅವರು ನಿರ್ಮಿಸುತ್ತಿರುವ ನೂತನ ಚಿತ್ರ ‘ಜಿದ್ದಿ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.
ಅನಂತರಾಜು ನಿರ್ದೇಶನದ ಈ ಚಿತ್ರಕ್ಕೆ ಬೆಂಗಳೂರು, ಮೇಲುಕೋಟೆ ಮುಂತಾದ ಕಡೆ ಚಿತ್ರಕ್ಕೆ ಮೂವತ್ತಾರು ದಿನಗಳ ಚಿತ್ರೀಕರಣ ನಡೆದಿದೆ.
ಐದು ಹಾಡುಗಳಿರುವ ಈ ಚಿತ್ರಕ್ಕೆ ಗಿರಿಧರ್ ದಿವಾನ್ ಸಂಗೀತ ನೀಡಿದ್ದಾರೆ. ನಿರಂಜನ್ಬಾಬು ಛಾಯಾಗ್ರಹಣ, ಸಂಜೀವರೆಡ್ಡಿ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಬಾಬುಖಾನ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ. ರವಿವರ್ಮರ ಸಾಹಸ ನಿರ್ದೇಶನವಿರುವ ‘ಜಿದ್ದಿಗೆ ಪನ್ನಾಲಾಲ್ ಕೊಠಾರಿ ಅವರ ಸಹ ನಿರ್ಮಾಣವಿದೆ.
ಪ್ರಜ್ವಲ್ದೇವರಾಜ್, ಅಂದ್ರಿತಾ ರೇ ಹಾಗೂ ಐಶ್ವರ್ಯನಾಗ್. ತಿಲಕ್, ಶ್ರೀನಿವಾಸಮೂರ್ತಿ, ಅಶೋಕ್, ಶಂಕರ್ಅಶ್ವತ್, ಸುಚೀಂದ್ರಪ್ರಸಾದ್, ವಿಜಯಸಾರಥಿ, ಯತಿರಾಜ್ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.